Rudset Institute Logo

“ Instead of writing someone else’s account through wage employment after three to five years of collegiate education, it is more meaningful to write one’s own account by embarking upon some self-employment "

- Dr. D. Veerendra Heggade

President, RUDSET Institutes
Veerendra Hegde
Call Us Now: +91 90680 00528

Valedictory function of Computer Hardware and Networking Training

ಮೈಸೂರು:- ರುಡ್‌ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್ ಮೈಸೂರು ಇವರ ಪ್ರಾಯೋಜಕತ್ವದಲ್ಲಿ ಉದ್ಯಮಶೀಲತಾಭಿವೃದ್ಧಿ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಕಾರ್ಯಕ್ರಮವನ್ನು ದಿನಾಂಕ: ೦೫.೦೭.೨೦೨೩ ರಿಂದ ೧೮.೦೮.೨೦೨೩ ರವರೆಗೆ ೪೫ ದಿನಗಳ ಕಾಲಾವಧಿಯಲ್ಲಿ ಆಯೋಜಿಸಲಾಗಿದ್ದು, ಈ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ ೧೮.೦೮.೨೦೨೩ ಶುಕ್ರವಾರ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಕೆ.ಎನ್. ಜನಾರ್ಧನ, ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಧರ್ಮಸ್ಥಳ ಇವರು ಭಾಗವಹಿಸಿದ್ದರು.
ಇವರು ಕಾರ್ಯಕ್ರಮದಲ್ಲಿ ಬಾಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸ್ವ ಉದ್ಯೋಗದಲ್ಲಿ ಯಶಸ್ವಿಯಾಗಲು ಮೊದಲು ಆತ್ಮವಿಶ್ವಾಸವು ಅತೀ ಅವಶ್ಯ, ಆದ್ದರಿಂದ ಮೊದಲಿಗೆ ನಿಮ್ಮ ಸ್ವ ಸಾಮರ್ಥ್ಯ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡು ಕೆಲಸವನ್ನು ಪ್ರಾರಂಭಿಸುವುದರಿAದ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರಲ್ಲಿಯೂ ವಿಶೇಷವಾದ ಚೇತನಶಕ್ತಿ ಇರುತ್ತದೆ, ಅದನ್ನು ಸರಿಯಾಗಿ ಗುರುತಿಸಿ ಬಳಸಿಕೊಂಡಾಗ ಸಾರ್ಥಕತೆ ಕಾಣುತ್ತದೆ. ನಮ್ಮ ಕೆಲಸವನ್ನು ಪ್ರೀತಿಯಿಂದ ಅನುಭವಿಸಿ ಕಲಿಯಬೇಕು, ಪ್ರತಿ ಕ್ಷಣವನ್ನು ಆಸ್ವಾದಿಸಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ನಾವು ಕೆಲಸ ಮಾಡುವಾಗ ಕತ್ತೆಯ ತರಹ ಹಾರ್ಡ್ವರ್ಕ್ ಮತ್ತು ಕುದುರೆಯ ರೀತಿ ಸ್ಮಾರ್ಟ್ ವರ್ಕ್ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕೆಲಸದಲ್ಲಿ ನಾವುಗಳು ಪಡೆಯುವ ಅನುಭವ ಮತ್ತು ಪರಿಣಿತಿ ಯಿಂದ ಯಶಸ್ಸು ಸಾಧಿಸಬಹುದು. ತಾವುಗಳು ಆರಿಸಿಕೊಂಡ ಕೌಶಲ್ಯಾಧಾರಿತ ಪುಸ್ತಕಗಳನ್ನು ಅಭ್ಯಾಸ ಮಾಡಿ ಹೆಚ್ಚಿನ ಕಲಿಕೆಗಳಲ್ಲಿ ತೊಡಗಿರಿ, ಪುಸ್ತಕಗಳ ಓದು ನಮ್ಮನ್ನು ತಲೆ ಎತ್ತುವಂತೆ ಮಾಡುತ್ತವೆ ಎಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ರಾಷ್ಟç ನಮ್ಮದು, ಯುವ ಶಕ್ತಿಯೇ ದೇಶದ ನಿಜವಾದ ಸಂಪತ್ತು, ಈ ಸಂಪತ್ತನ್ನು ಸರಿಯಾದ ದಾರಿಯಲ್ಲಿ ಮಾರ್ಗದರ್ಶಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದರು. ಕಾಯಕದಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ದುಡಿಯಿರಿ ಎಂದು ತಿಳಿಸುತ್ತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ಎಂ. ಲಿಂಗಣ್ಣ, ರಾಜ್ಯ ನಿರ್ದೇಶಕರು (ನಿವೃತ್ತ), ಆರ್‌ಸೆಟಿ ಸಂಸ್ಥೆಗಳು, ಮೈಸೂರು, ಅತಿಥಿ ಉಪನ್ಯಾಸಕರುಗಳಾದ ಶ್ರೀ ಸುಬ್ರಮಣ್ಯ, ಶ್ರೀ ಯೋಗೇಶ್, ಶ್ರೀ ಗೌತಮ್ ಮತ್ತು ಶ್ರೀ ದೇವರಾಜು ಇವರುಗಳು ಭಾಗವಹಿಸಿದ್ದರು.
ಸಂಸ್ಥೆಯ ಉಪನ್ಯಾಸಕರಾದ ಶ್ರೀ ಪಾಲ್‌ರಾಜ್ ರವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದರು.
ಮತ್ತೋರ್ವ ಉಪನ್ಯಾಸಕರಾದ ಶ್ರೀಮತಿ ಲತಾಮಣಿ ಯವರು ಕಾರ್ಯಕ್ರಮ ನಿರೂಪಿಸಿದರು.
ಒಟ್ಟು ಕಾರ್ಯಕ್ರಮದಲ್ಲಿ ೯೦ ಜನ (ಕಂಪ್ಯೂಟರ್ ಹಾರ್ಡ್ವೇರ್ ಸರ್ವಿಸ್, ದ್ವಿ ಚಕ್ರ ವಾಹನಗಳ ರೀಪೇರಿ ಮತ್ತು ಎಲೆಕ್ಟಿçಕ್ ಮೋಟಾರ್ ರಿವೈಂಡಿAಗ್ ಸರ್ವಿಸ್ ತರಬೇತಿಗಳ) ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.